ಪ್ರತಿ ದಿನ ಯೋಗ ತರಗತಿಗಳಲ್ಲಿ ಮಾಡುವ ಪ್ರಾರ್ಥನೆಗಳು

ಪ್ರಾರ್ಥನೆ

ಮೊದಲು ಓಂಕಾರವನ್ನು ಮೂರು ಬಾರಿ ಉಚ್ಚರಿಸುವುದು.

ಶಾಂತಿ ಮಂತ್ರ

ಓಂ ಸಹನಾವವತು  | 

ಸಹನೌಭುನಕ್ತು  |

ಸಹವೀರ್ಯಂ ಕರವಾವಹ್ಯೆ 

ತೆಜಸ್ವಿನಾ ವಧೀತಮಸ್ತು | 

ಮಾ ವಿದ್ವಿಷಾವಹ್ಯೆಃ ||

ಓಂ ಶಾಂತಿಃ ಶಾಂತಿಃ ಶಾಂತಿಃ

ಅರ್ಥ :- ಪರಬ್ರಹ್ಮವು ನಮ್ಮೆಲ್ಲರನ್ನು ಜೊತೆಯಲ್ಲಿ ರಕ್ಷಿಸಲಿ. ನಮ್ಮೆಲ್ಲರನ್ನು ಜೊತೆಯಲ್ಲಿ ಪೋಷಿಸಲಿ, ಜೊತೆಯಲ್ಲಿಯೇ ನಾವು ಸಮರ್ಥವಾದ ಕಾರ್ಯವನ್ನು ಮಾಡುವಂತಾಗಲಿ, ನಮ್ಮೆಲ್ಲರ ಅಧ್ಯಯನವು ತೇಜಸ್ವಿಯಾಗಲಿ, ನಾವು ದ್ವೇಷಿಸದೇ ಇರುವಂತಾಗಲಿ, ನಮ್ಮಲ್ಲಿಯೂ, ಪರಿಸರದಲ್ಲಿಯೂ, ನಮ್ಮ ಮೇಲೆ ಪ್ರಭಾವ ಬೀರುವ ದೈವಶಕ್ತಿಗಳಲ್ಲಿಯೂ ಶಾಂತಿ ವ್ಯಾಪಿಸಲಿ.

ಗುರುಸ್ತುತಿ

ಅರ್ಥ :- ಗುರುವೇ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಾಗಿದ್ದಾನೆ. ಸಾಕ್ಷಾತ್‌ ಪರಬ್ರಹ್ಮ ವಸ್ತುವೂ ಗುರುವೇ ಆದ್ದರಿಂದ ಇಂತಹ ಗುರುವಿಗೆ ನಮನಗಳು.

ಸೂರ್ಯನಮಸ್ಕಾರ ಮಂತ್ರ

ಓಂ ಹಿರಣ್ಯಯೇನ ಪಾತ್ರೇಣ |

ಸತ್ಯಾಸ್ಯಾಪಿ ಹಿತಂ ಮುಖಂ |

ತತ್ವಂ ಪೂಷನ್ನ ಪಾವೃಣು |

ಸತ್ಯಧರ್ಮಾಯ ದೃಷ್ಟಯೇ ||

ಧ್ಯೇಯಃ ಸದಾ ಸವಿತ್ರಮಂಡಲ ಮಧ್ಯವರ್ತಿ |

ನಾರಾಯಣ ಸರಸಿಜಾಸನ ಸನ್ನಿವಿಷ್ಟಃ ||

ಕೇಯೂರವಾನ್‌ ಮಕರಕುಂಡಲವಾನ್‌ ಕಿರೀಟಿ ಹಾರಿಹಿರಣ್ಮಯ ವಪುಃದೃತ ಶಂಕಚಕ್ರಃ ||

ಅರ್ಥ :- ಸತ್ಯದ ಮುಖವನ್ನು ಚಿನ್ನದ ತಟ್ಟೆಯಂತಿರುವ ನಿನ್ನ ಬಿಂಬದಿಂದ ಮುಚ್ಚಿರುವ ಸೂರ್ಯಭಗವಂತನೇ, ಸತ್ಯ ಧರ್ಮ ಪರಾಯಣನಾದ ನನ್ನ ಕಣ್ಣಿಗೆ ನಿನ್ನ ಚಿನ್ನದ ಮುಖವಾಡವನ್ನು ತೆಗೆದು ಸತ್ಯ ಸ್ವರೂಪವು ಗೋಚರವಾಗುವಂತೆ ಮಾಡು.

ಸೂರ್ಯ ಮಂಡಲದ ಮಧ್ಯದಲ್ಲಿ ಶೋಭಿಸುವ ನಾರಾಯಣನನ್ನು ಯಾವಾಗಲೂ ಧ್ಯಾನಿಸಬೇಕು. ಅವನು ತಾವರೆಯ ಮೇಲೆ ಕುಳಿತಿದ್ದು ಮಕರದಂತಿರುವ ಕರ್ಣಾಭರಣ, ಕಿರೀಟ, ಹಾರ ಮತ್ತು ಭುಜಗಳಲ್ಲಿ ಶಂಖ, ಚಕ್ರಗಳನ್ನು ಧರಿಸಿ ಬಂಗಾರದಂತೆ ಮೈಕಾಂತಿಯಿಂದ ವಿರಾಜಿಸುತ್ತಿದ್ದಾನೆ.

Similar Posts

Leave a Reply

Your email address will not be published. Required fields are marked *